Slide
Slide
Slide
previous arrow
next arrow

ದಾಂಡೇಲಿಯ ಡಾ.ಸರ್ಫರಾಜ್ ಖಾನ್‌ಗೆ ಪ್ರಶಸ್ತಿ

300x250 AD

ದಾಂಡೇಲಿ: ನಗರದ ಬೈಲ್‌ಪಾರ್ ನಿವಾಸಿ ಹಾಗೂ ಪ್ರಸಕ್ತ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಶ್ರೀ ಸಂಗಮನಾಥ್ ಇಂಟರ್‌ನ್ಯಾಷನಲ್ ಸಿಬಿಎಸ್‌ಸಿ ಶಾಲೆಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸರ್ಫರಾಜ್ ಖಾನ್ ಅವರ ಶೈಕ್ಷಣಿಕ ಸೇವೆ, ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ವಿಶೇಷ ಕೊಡುಗೆಗಳನ್ನು ಸ್ಮರಿಸಿ ಆಲ್ ಇಂಡಿಯಾ ಸ್ಕೂಲ್ ಪ್ರಿನ್ಸಿಪಾಲ್ ಅಸೋಸಿಯೇಶನ್ ವತಿಯಿಂದ ಬೆಂಗಳೂರಿನ ಬಿ.ಎಂ.ಎಸ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಾಲ್ಡೀವ್ಸ್ ನ ಶಿಕ್ಷಣ ಸಚಿವ ಡಾ.ಅಬ್ದುಲ್ಲಾ ರಶೀದ್ ಅಹ್ಮದ್ ಮತ್ತು ಡಾ.ಸುಬ್ರಹ್ಮಣ್ಯ ಶರ್ಮಾ ಅವರು ಈ ಪ್ರಶಸ್ತಿಯನ್ನು ಡಾ.ಸರ್ಫರಾಜ್ ಖಾನ್ ಅವರಿಗೆ ಪ್ರದಾನ ಮಾಡಿದರು. ಕಳೆದ ಹಲವಾರು ವರ್ಷಗಳಿಂದ ಶ್ರೀ.ಸಂಗಮನಾಥ್ ಇಂಟರ್ ನ್ಯಾಷನಲ್ ಸಿಬಿಎಸ್‌ಸಿ ಶಾಲೆಯ ಪ್ರಾಚಾರ್ಯರಾಗಿ ಗಮನಾರ್ಹ ಸಾಧನೆಯ ಮೂಲಕ ಗಮನ ಸೆಳೆದಿರುವ ಡಾ.ಸರ್ಫ್ರಾಜ್ ಖಾನ್ ಅವರಿಗೆ ಈಗಾಗಲೆ ಸಾಕಷ್ಟು ಪ್ರಶಸ್ತಿಗಳು ಬಂದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇವರು ನಗರದ ಬೈಲ್‌ಪಾರಿನ ಉಸ್ಮಾನ್ ಖಾನ್ ಮತ್ತು ಆಶಾಬಿ ದಂಪತಿ ಸುಪುತ್ರರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top